Kannada News: ಅಪ್ಪನಿಗಿಂತ ಒಂದು ಹೆಜ್ಜೆ ಮುಂದೆ ಇರುವ ಉಪ್ಪಿ ಮಗಳು ಐಶ್ವರ್ಯ: ಶಾಲಾ ಭಾಷಣದಲ್ಲಿ ಮಾತನಾಡಿದ್ದು ಕೇಳಿ ಎಲ್ಲರೂ ಶಾಕ್. ಏನು ಹೇಳಿದ್ದಾರೆ ಗೊತ್ತೆ?
Kannada News: ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಮತ್ತು ಪ್ರಿಯಾಂಕ ಉಪೇಂದ್ರ (Priyanka Upendra) ದಂಪತಿಯ ಇಬ್ಬರು ಮಕ್ಕಳು ಓದುತ್ತಿರುವುದು ಬೆಂಗಳೂರಿನ (Bangalore) ಪ್ರತಿಷ್ಠಿತ ವ್ಯಾಲಿ ಸ್ಕೂಲ್ ನಲ್ಲಿ. ಈ ಸ್ಕೂಲ್ ನಲ್ಲಿ ಹಲವು ವಿಶಿಷ್ಟ ಆಚರಣೆಗಳಿಂದ ಹೆಸರು ಮಾಡಿದೆ. ಎಲ್ಲರೂ ತಮ್ಮ ಮಕ್ಕಳನ್ನು ತಮ್ಮ ಶಾಲೆಗೆ ಸೇರಿಸಬೇಕು ಎಂದು ಬಯಸುತ್ತಾರೆ. ಈ ಶಾಲೆಯ ಕಾರ್ಯಕ್ರಮದಲ್ಲಿ ಉಪೇಂದ್ರ ಅವರ ಮಗಳು ಐಶ್ವರ್ಯ (Aishwarya Upendra) ಭಾಷಣ ಮಾಡಿ ಹೇಳಿರುವ ಮಾತುಗಳು ಕೇಳಿ ಮಗಳು ಥೇಟ್ ಅಪ್ಪನ ಹಾಗೆಯೇ, ಅಪ್ಪನಿಗಿಂತ ಒಂದು ಹೆಜ್ಜೆ ಮುಂದಿದ್ದಾಳೆ ಎನ್ನಿಸುವುದು ಖಂಡಿತ. ಉಪೇಂದ್ರ ಅವರ ಮಗಳು ಹೇಳಿದ್ದೇನು ಎಂದು ತಿಳಿಸುತ್ತೇವೆ ನೋಡಿ..
“ಪ್ರತಿದಿನ ಜೀವನದ ಕೊನೆಯ ದಿನ ಎಂದುಕೊಂಡು ನಾವು ಯಾಕೆ ಬದುಕಬೇಕು ಎನ್ನುವ ವಿಷಯದ ಬಗ್ಗೆ ಇವತ್ತು ನಾನು ಮಾತನಾಡುತ್ತೇನೆ. ವಯಸ್ಸು ಎನ್ನುವ ಅಂಶವನ್ನು ಪಕ್ಕಕ್ಕೆ ಇಟ್ಟು ನೋಡುವುದಾದರೆ, ನಾವು ಇದೇ ರೀತಿ ಜೀವಿಸುತ್ತೇವೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ತಿಳಿದುಕೊಳ್ಳಬೇಕಾದ ಅಥವಾ ಮಾಡಬೇಕಾದ ವಿಷಯಗಳನ್ನು ಮುಂದೂಡುತ್ತಲೇ ಇರುತ್ತಾರೆ. ಅದೆಲ್ಲವೂ ಸಾಮಾನ್ಯ ಎನ್ನುವ ಹಾಗೆ ಮುಂದಕ್ಕೆ ಹಾಕುತ್ತಾರೆ. ಕನಸುಗಳನ್ನು ಹಿಂಬಾಲಿಸಿ ಹೋಗುವುದು, ಸತ್ಯ ಮತ್ತು ನಿಷ್ಠೆಯಿಂದ ಇರುವುದು, ಭಾವನೆಗಳ ಬಗ್ಗೆ ಮುಕ್ತವಾಗಿ ಇರುವುದು ಇದನ್ನೇ ಮಾಡುತ್ತದೆ. ಅಸಲಿ ಕೆಲಸ ಏನಿದೆ ಅದನ್ನು ನಾವು ಮಾಡುವುದಿಲ್ಲ, ಮರುದಿನ, ಮುಂದಿನ ವಾರ, ಮುಂದಿನ ತಿಂಗಳು, ಅಥವಾ ಮುಂದಿನ ವರ್ಷಕ್ಕೆ ಮುಂದೂಡುತ್ತೇವೆ, ಮುಂದಿನ ತಿಂಗಳು ಇರಲಿ, ನಾಳೆಗೂ ಗ್ಯಾರಂಟಿ ಇಲ್ಲ ಎನ್ನುವುದನ್ನು ಎಲ್ಲರೂ ಮರೆತುಬಿಡುತ್ತಾರೆ. ಬದುಕು ನಮಗೆ ಕೊಡುವ ಒಂದೇ ಒಂದು ಗ್ಯಾರಂಟಿ ಅಂದ್ರೆ ನಮಗೊಂದು ಕೊನೆ ಇದೆ ಎನ್ನುವುದು. ನಾವೆಲ್ಲರೂ ಸೀಮಿತ ಜೀವಿಗಳು. ಜೀವನ ಚಿಕ್ಕದು ಎಂದು ಗೊತ್ತಿದ್ದರೂ ಕೂಡ, ನಾವು ಅದನ್ನು ಜೀವಿಸುವುದು ಬಹಳ ಕಡಿಮೆ. ಇದನ್ನು ಓದಿ..Kannada News: ಅಪ್ಪು ಬಲವನ್ನು ಸೆಳೆಯಲು ರಾಜಕೀಯ ನಾಯಕರ ಹೊಸ ತಂತ್ರ: ಅಶ್ವಿನಿ ಬಳಿ ತೆರಳಿದ ಬಳಿಕ ಆದದ್ದೇನು ಗೊತ್ತೇ?? ಈ ನಿರ್ಧಾರ ಸರಿಯೇ??

ಹೆಚ್ಚಿನ ಜನರಿಗೆ ಹೃದಯಬಡಿತ ನಿಲ್ಲುವುದು ಔಪಚಾರಿಕವಾಗಿರುತ್ತದೆ, ಆ ಸತ್ಯ ಎಷ್ಟೇ ಕಹಿ ಆಗಿದ್ದರು ಕೂಡ, ಮುಂದೊಂದು ದಿನ ಈ ಔಪಚಾರಿಕ ಭಾವನೆ ಮುಗಿದು ಹೋಗುತ್ತದೆ. ಒಂದು ವೇಳೆ ಸಾವು ಇಂದೇ ಬರುವುದಾದರೆ, ಈ ದಿನ ನೀವು ಇರುವವರ ಜೊತೆಗೆ ಸಂತೋಷವಾಗಿದ್ದೀರಾ? ಪ್ರಪಂಚಕ್ಕೆ ನೀವು ತಂದಿರುವುದೇನು?ನೀವು ನೋವು ಅನುಭವಿಸುತ್ತಿದ್ದೀರಾ? ಇಷ್ಟ ಪಡುವ ವಿಷಯಗಳನ್ನು ಮಾಡದೆ ಅಥವಾ ಅದನ್ನು ಹೇಳದೆಯೇ ಇರುತ್ತಿದ್ದೀರಾ. ಸಾಯುವ ಸಮಯದಲ್ಲಿ ಅದು ಮುಖ್ಯವೆ? ದಿನಾ ಬೆಳಗ್ಗೆ ಏಳುವಾಗ ಆ ವಿಷಯ ನಿಮ್ಮ ಮನಸ್ಸಿನಲ್ಲಿ ಉಳಿದು ಹೋಗುತ್ತದೆ, ಜೀವನ ಶಕ್ತಿಯಿಂದ ಇರುತ್ತದೆ.. ನಿಮ್ಮಲ್ಲಿರುವ ಭಯವನ್ನು ತೆಗೆದುಹಾಕುವ ಶಕ್ತಿ ಇರುವುದು ನಿಮ್ಮಲ್ಲಿ ಮಾತ್ರ.. ಅದನ್ನು ದೂರ ಮಾಡುವುದು ನೀವೇ..ಸೋಲಿನ ಮೇಲೆ, ತಿರಸ್ಕಾರದ ಮೇಲೆ, ತಾನು ಹೀಗಿಲ್ಲ, ಹಾಗಿಲ್ಲ ಎನ್ನುವುದರ ಮೇಲೆ, ಇರುವ ಭಯವನ್ನು ದೂರ ಮಾಡಬಹುದು. ಜೀವನ ಎನ್ನುವುದು ಅಸಡ್ಡೆಯಿಂದ ಬಳಸುವುದಕ್ಕೆ ಇರುವ ಫ್ರೀಪಾಸ್ ಅಲ್ಲ. ನಿಮ್ಮ ಮನಸ್ಸಿಗೆ ಗೊತ್ತಿರುವ ಜೀವನವನ್ನು ಅನುಸರಿಸಲು ಸಿಕ್ಕಿರುವ ಲೈಸೆನ್ಸ್. ನಿಮ್ಮ ಜೀವನದ ಕಥೆಗೆ ನೀವೇ ಹೀರೋ.
ಬೇಡದ ಪಾತ್ರಗಳ ಬಗ್ಗೆ ಯೋಚನೆ ಮಾಡುವುದನ್ನು ನಿಲ್ಲಿಸಿ..ಈ ಭೂಮಿ ಮೇಲೆ ನೀವು ಕಳೆಯುವ ಪ್ರತಿಯೊಂದು ಕ್ಷಣ ನಿಮ್ಮ ನೆನಪಿನ ಭಾಗ ಆಗಿದೆ. ನಿಮ್ಮ ಕನಸುಗಳ ಹಿಂದೆ ಸಾಗಿ, ಉತ್ಸಾಹ ಮತ್ತು ಧೃಡ ಸಂಕಲ್ಪದಿಂದ ಅದನ್ನು ಮಾಡಿ. ನಾವು ಚಿಕ್ಕವರಾಗಿದ್ದಾಗ, ಬೇಗ ದೊಡ್ಡವರಾಗಬೇಕು ಎಂದು ಬಯಸುತ್ತೇವೆ. ಬಾಲ್ಯಕ್ಕೆ ಹಿಂದಿರುಗಬೇಕು ಎಂದು ಹಲವರು ಬಯಸುತ್ತಾರೆ, ಆದರೆ ನಾನು ಹಿಂದಕ್ಕೆ ಹೋಗಲು ಇಷ್ಟಪಡುವುದಿಲ್ಲ. ಯಾಕೆಂದರೆ ಯಾವುದು ಶಾಶ್ವತ ಅಲ್ಲ ಎನ್ನುವ ನೆನಪು ಮಾಡಿಕೊಳ್ಳುತ್ತಾ, ಮುಂದುವರೆಯಲು ಇಷ್ಟಪಡುತ್ತೇನೆ. ನನ್ನ ಭಾಷಣ ಮುಗಿಸುವ ಸಮಯಕ್ಕೆ, ಈ ಹಾಡಿನ ಸಾಲುಗಳು ನೆನಪಿಗೆ ಬರುತ್ತಿದೆ.. ಇದು ಡೈಲನ್ ಕಾನ್ರಿಕ್ ಅವರ ಬರ್ತ್ಡೇ ಕೇಕ್ ಎನ್ನುವ ಹಾಡು.. ಜಗತ್ತು ಉರಿಯುತ್ತಿರುವಂತೆ ಬದುಕು, ಮನಸುಗಳು ಮುರಿಯದ ಹಾಗೆ ಪ್ರೀತಿಸು…ಎನ್ನುವ ಸಾಲುಗಳನ್ನು ಹೇಳಿ ಭಾಷಣ ಮಾಡಿದ್ದಾರೆ ಐಶ್ವರ್ಯ. ಈ ಮಾತು ಕೇಳಿದರೆ ನಿಮಗೆ ಅರ್ಥವಾಗುತ್ತದೆ, ಮಗಳು ಅಪ್ಪನಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ ಎಂದು. ಇದನ್ನು ಓದಿ.. Kannada News: ನಿನ್ನೆ ತಾನೇ ಹುಟ್ಟುಹಬ್ಬ ಆಚರಿಸಿಕೊಂಡ ಶಾನ್ವಿ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ? ನಂಬೋಕೆ ಆಗಲ್ಲ, ಇನ್ನು ಶಾಲಾ ಹುಡುಗಿಯಂತೆ ಕಾಣ್ತಿರ.