ಅಪ್ಪು ರೂಂನಲ್ಲಿ ಅಶ್ವಿನಿ ಮಲಗಿದ್ದ ವೇಳೆ ಕಿಟಕಿ ಬಳಿ ನಡೆದಿದ್ದೇನು? ಕಣ್ಣೀರಿಟ್ಟ ಅಶ್ವಿನಿ. ಶಿವಣ್ಣ ಹೇಳಿದ್ದೇನು ಗೊತ್ತೇ??

49

ನಮ್ಮೆಲ್ಲರ ಪ್ರೀತಿಯ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಈ ಪ್ರಪಂಚ ಬಿಟ್ಟು ಹೋಗಿ ಒಂದು ವರ್ಷ ಕಳೆದು ಹೋಯಿತು. ಆದರೆ ಜನರಾಗಲಿ ಕುಟುಂಬದವರಾಗಲಿ, ಈ ನೋವನ್ನು ಒಪ್ಪಿಕೊಳ್ಳಲು ಇಂದಿಗೂ ಸಾಧ್ಯವಾಗುತ್ತಿಲ್ಲ. ಎಲ್ಲಾ ಅಭಿಮಾನಿಗಳು ಈಗಲೂ ಸಹ ಅಪ್ಪು ಅವರ ನೆನಪಲ್ಲಿದ್ದಾರೆ, ಪ್ರತಿದಿನ ಅಪ್ಪು ಅವರ ಪುಣ್ಯ ಸ್ಮರಣೆಯ ಜಾಗಕ್ಕೆ, ಸಾವಿರಾರು ಜನಕ್ಕೆ ಬಂದು ಹೋಗುತ್ತಿದ್ದಾರೆ. ಇನ್ನು ಕುಟುಂಬದವರ ಭಾವನೆಗಳು ಹೇಗಿರುತ್ತದೆ ಎಂದು ಊಹಿಸಲು ಸಹ ಕಷ್ಟವೇ. ಇದೀಗ ಅಶ್ವಿನಿ ಮೇಡಂ ಅವರಿಗೆ ಮನೆಯಲ್ಲಿ ಒಂದು ಘಟನೆ ನಡೆದಿದ್ದು, ಎಲ್ಲರಿಗೂ ಆಶ್ಚರ್ಯ ತಂದಿದೆ.

ಅಶ್ವಿನಿ ಮೇಡಂ ಅವರು ಮನೆಯಲ್ಲಿ ಮಲಗಿದ್ದು, ಬೆಳಗ್ಗೆ ಎದ್ದು ನೋಡಿದಾಗ, ಅಪ್ಪು ಅವರ ರೂಮ್ ನಲ್ಲಿ ಇಟ್ಟಿರುವ ಅಪ್ಪು ಅವರ ಫೋಟೋ ಮೇಲೆ ಪಾರಿವಾಳ ಬಂದು ಕೂತಿತ್ತಂತೆ, ಬೆಳಗ್ಗೆ ಎದ್ದ ನಂತರ ಅಶ್ವಿನಿ ಅವರು ಆ ಪಾರಿವಾಳವನ್ನು ನೋಡಿ ಶಾಕ್ ಆಗಿದ್ದಾರೆ. ಕೆಲ ಸಮಯ ಪಾರಿವಾಳವನ್ನೇ ನೋಡಿದ ಅಶ್ವಿನಿ ಮೇಡಂ ಅವರು ಅದಕ್ಕೆ ಬೇಕಾದ ಆಹಾರ ನೀರು, ಎಲ್ಲವನ್ನು ನೀಡಿದ್ದು, ಆದರೆ ಪಾರಿವಾಳವು ಅದನ್ನು ತಿನ್ನದೆ ಅಶ್ವಿನಿ ಅವರನ್ನೇ ಸ್ವಲ್ಪ ಸಮಯ ನೋಡಿ ಹೊರಗೆ ಹಾರಿ ಹೋಗಿದೆ, ಈ ಘಟನೆ ನಡೆದಿದ್ದು ಅಶ್ವಿನಿ ಮೇಡಂ ಅವರಿಗೆ ಶಾಕ್ ನೀಡಿದೆ.

ಆದರೆ ಬಹುಶಃ ಪುನೀತ್ ರಾಜ್ ಕುಮಾರ್ ಅವರೇ ಪಾರಿವಾಳದ ರೂಪದಲ್ಲಿ ಅಶ್ವಿನಿ ಮೇಡಂ ಅವರನ್ನು ನೋಡಲು ಬಂದಿರಬಹುದೇ ಎನ್ನುವ ಅಭಿಪ್ರಾಯ ಕೂಡ ಈಗ ವ್ಯಕ್ತವಾಗುತ್ತಿದ್ದು, ಅಭಿಮಾನಿಗಳು ಇದನ್ನೇ ನಂಬಿದ್ದಾರೆ. ಅಪ್ಪು ಅವರು ಇದ್ದಾದ ತಮ್ಮ ಕುಟುಂಬವನ್ನು ಎಲ್ಲಕ್ಕಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದರು. ಕುಟುಂಬದ ಮೇಲೆ ಅವರಿಗೆ ಬಹಳ ಕಾಳಜಿ ಇತ್ತು, ಅಂತಹ ಅಪ್ಪು ಅವರು ಇದ್ದಕ್ಕಿದ್ದ ಹಾಗೆ ಈ ಪ್ರಪಂಚ ಬಿಟ್ಟು ಹೋಗುವ ಹಾಗೆ ಆಗಿದ್ದು, ಬಹಳ ಬೇಸರದ ವಿಚಾರ ಆಗಿದೆ.