ಕೋಟಿ ಕೋಟಿ ಸುರಿದು ಡಿ ಬಾಸ್ ಪ್ರಮೋಷನ್ ಮಾಡಿದ ಬನಾರಸ್ ಸೋತ ನಂತರ, ಡಿ ಬಾಸ್ ಬಗ್ಗೆ ನಟಿ ಸೋನಲ್ ಹೇಳಿದ್ದೇನು ಗೊತ್ತೇ??
ಮಾಜಿ ಸಚಿವ ಜಮೀರ್ ಅಹಮದ್ ಅವರ ಪುತ್ರನ ಸಿನಿಮಾ ಬನಾರಸ್ ನವೆಂಬರ್ 4ರಂದು ಬಿಡುಗಡೆಯಾಗಿದೆ. ಜಯತೀರ್ಥ ಅವರು ಈ ಚಿತ್ರ ನಿರ್ದೇಶಿಸಿದ್ದಾರೆ. ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಈ ಚಿತ್ರ ಹೇಳಿಕೊಳ್ಳುವಂತಹ ಸದ್ದೇನು ಮಾಡಿಲ್ಲ. ಮೊದಲ ದಿನವೇ ಅದೆಷ್ಟೋ ಚಿತ್ರಮಂದಿರಗಳು ಜನರಿಲ್ಲದೆ ಖಾಲಿಯಾಗಿದ್ದವು. ಚಿತ್ರಕ್ಕೆ ಕೆಲವು ಕಡೆ ಜನರು ಒಳ್ಳೆಯ ಪ್ರತಿಕ್ರಿಯೆ ನೀಡುತ್ತಿದ್ದರೆ ಇನ್ನೂ ಬೆಂಗಳೂರಿನ ಸಾಕಷ್ಟು ಕಡೆ ಈ ಚಿತ್ರವನ್ನು ನೋಡಲು ಜನರೇ ಇಲ್ಲ. ಚಿತ್ರದ ಕುರಿತಾಗಿ ಮಿಶ್ರ ಪ್ರತಿಕ್ರಿಯೆಗಳು ಕೇಳಿ ಬರುತ್ತಿವೆ. ಇದೆಲ್ಲದರ ನಡುವೆ ಇದೀಗ ಬನರಸ್ ಚಿತ್ರದ ನಾಯಕ ನಟಿ ಸೋನಲ್ ಒಂದು ಆಶ್ಚರ್ಯ ಪ್ರತಿಕ್ರಿಯೆ ನೀಡಿದ್ದಾರೆ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಬಗ್ಗೆ ಮಾಧ್ಯಮದ ಜೊತೆಗೆ ನೀಡಿದ ಸಂದರ್ಶನ ಒಂದರಲ್ಲಿ ಅವರು ಕೆಲವು ಮಾತುಗಳನ್ನು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ. ಸಾಕಷ್ಟು ಕಡೆ ಚಿತ್ರಕ್ಕೆ ಕೇವಲ ಮೂರು ಸ್ಟಾರ್ ನೀಡಲಾಗಿದೆ. ಬೆಂಗಳೂರಿನಲ್ಲೇ ಸಾಕಷ್ಟು ಚಿತ್ರಮಂದಿರಗಳಲ್ಲಿ ಚಿತ್ರದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿಲ್ಲ. ಬುಕ್ ಮೈ ಶೋನಲ್ಲೂ ಕೂಡ ಇದೇ ರೀತಿಯ ಮಿಶ್ರ ಪ್ರತಿಕ್ರಿಯೆಗಳು ಮುಂದುವರಿದಿವೆ. ಚಿತ್ರದ ಬಿಡುಗಡೆಗು ಮೊದಲು ಅದ್ದೂರಿಯಾಗಿ ಪ್ರೀ ರಿಲೀಸ್ ಈವೆಂಟ್ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಜಮೀರ್ ಅಹಮದ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನು ಆಹ್ವಾನಿಸಿದ್ದರು. ಈ ಸಿನಿಮಾ ದೊಡ್ಡ ಸದ್ದು ಮಾಡಲಿದೆ ಎಂದೆಲ್ಲ ಭಾಗಿಯಾಗಿದ್ದ ಎಲ್ಲ ಅತಿಥಿಗಳು ನಟರು ಹೇಳಿದ್ದರು. “ಈ ಚಿತ್ರವನ್ನು ನಾನು ಈಗಾಗಲೇ ನೋಡಿದ್ದೇನೆ, ನನಗೆ ಈ ಚಿತ್ರ ಬಹಳ ಇಷ್ಟವಾಯಿತು. ಹಾಗಾಗಿಯೇ ನಾನು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ” ಎಂದೆಲ್ಲ ಅಂದು ನಟ ದರ್ಶನ್ ಹೇಳಿದ್ದರು.

ಆದರೆ ಇದೀಗ ತೆರೆಕಂಡಿರುವ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆಗಳು ಕಂಡುಬರುತ್ತಿವೆ. ಅಂತ ದೊಡ್ಡ ಮಟ್ಟದ ಒಳ್ಳೆಯ ರಿವ್ಯೂ ಚಿತ್ರಕ್ಕೆ ಕೇಳಿ ಬರುತ್ತಿಲ್ಲ. ಬನಾರಸ್ ಚಿತ್ರ ಬಿಡುಗಡೆಗೊಂಡ ನಂತರ ನಟಿ ಸೋನಲ್ ರವರು ಮಾಧ್ಯಮ ಒಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರಿಗೆ ಸಂದರ್ಶಕ ದರ್ಶನ್ ರವರ ಬಗ್ಗೆ ಕೇಳಿದ್ದರು. ಆಗ ಉತ್ತರಿಸಿರುವ ಸೋನಲ್ – “ದರ್ಶನ್ ಅವರು ಒಬ್ಬ ಸೂಪರ್ ಸ್ಟಾರ್. ಅವರೊಂದಿಗೆ ವೇದಿಕೆ ಹಂಚಿಕೊಳ್ಳುವುದೇ ಅದೃಷ್ಟ. ಅವರೊಂದಿಗೆ ನಾನು ರಾಬರ್ಟ್ ಸಿನಿಮಾ ಮಾಡಿದ್ದು ನನ್ನ ವೃತ್ತಿ ಜೀವನದ ಅತ್ಯಂತ ಮರೆಯಲಾರದ ವಿಷಯ. ಅವರು ನಮ್ಮ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅದು ನಿಜಕ್ಕೂ ಅವರು ಎಂತಹ ಸರಳ ವ್ಯಕ್ತಿ ಎನ್ನುವುದನ್ನ ತೋರಿಸುತ್ತದೆ ಎಂದು ಹೇಳಿದ್ದಾರೆ.