ಇನ್ನು ಶುರುವಾಗಲಿದೆ ನಿಮ್ಮ ಅದೃಷ್ಟ: ಕೇವಲ 6 ದಿನಗಳಲ್ಲಿ ನಿಮ್ಮ ಕಷ್ಟಗಳೆಲ್ಲವೂ ಡಮಾರ್: ಹೇಗಿರಲಿದೆ ಗೊತ್ತೇ ಮುಂದಿನ ದಿನಗಳು.
ನಮಸ್ಕಾರ ಸ್ನೇಹಿತರೇ ಪ್ರತಿಯೊಂದು ಕೆಲಸಕ್ಕೂ ಕೂಡ ಮಂಗಳವನ್ನು ಕರುಣಿಸುವ ಮಂಗಳ ಗ್ರಹ ಇದೇ ಅಕ್ಟೋಬರ್ 16ರಂದು ಮಿಥುನ ರಾಶಿಯಲ್ಲಿ ಸಂಕ್ರಮಣ ಮಾಡಲಿದ್ದಾನೆ. ಈ ಸಂದರ್ಭದಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದ್ವಾದಶ ರಾಶಿಗಳಲ್ಲಿ ಮೂರು ರಾಶಿಯವರಿಗೆ ಶುಭ ಲಾಭವನ್ನು ಕರುಣಿಸಲಿದ್ದಾನೆ. ಹಾಗಿದ್ದರೆ ಇಂತಹ ಸುವರ್ಣ ಅದೃಷ್ಟವನ್ನು ಹೊಂದಲಿರುವ ಆ ಮೂರು ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ.

ಮೇಷ ರಾಶಿ; ಈ ಸಂದರ್ಭದಲ್ಲಿ ಮೇಷ ರಾಶಿಯ ಜೀವನದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳು ಉಂಟಾಗುತ್ತವೆ. ಉದ್ಯೋಗ ಜೀವನದಲ್ಲಿ ಕೆಲವರು ಭಡ್ತಿ ಪಡೆದರೆ ಇನ್ನು ಕೆಲವರು ಕೆಲಸಕ್ಕಾಗಿ ಹುಡುಕುತ್ತಿರುವವರಿಗೆ ಕೆಲಸ ಸಿಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಹಲವಾರು ಲಾಭವನ್ನು ಪಡೆಯುವಂತಹ ಸಂಪರ್ಕಗಳು ಹಾಗೂ ಡೀಲ್ ಗಳು ವ್ಯಾಪಾರಿಗಳಿಗೆ ಈ ಸಂದರ್ಭದಲ್ಲಿ ಅತ್ಯಂತ ಸುಲಭವಾಗಿ ಸಿಗಲಿದ್ದು ಮುಂದಿನ ದಿನಗಳಲ್ಲಿ ಇದು ಅವರಿಗೆ ಅತ್ಯಂತ ದೊಡ್ಡ ಮಟ್ಟದ ಹಣದ ಹರಿವನ್ನು ನೀಡಲಿದೆ.
ಸಿಂಹ ರಾಶಿ; ಮಂಗಳನು ಮಿಥುನ ರಾಶಿಗೆ ಕಾಲಿಡುವ ಕಾರಣದಿಂದಾಗಿ ಸಿಂಹ ರಾಶಿಯವರಿಗೆ ಆದಾಯದಲ್ಲಿ ಹೆಚ್ಚಳವನ್ನು ತರಲಿದೆ. ವ್ಯಾಪಾರದಲ್ಲಿ ಕೂಡ ವ್ಯಾಪಾರಸ್ಥರು ಬೇರೆ ಸಮಯಕ್ಕೆ ಹೋಲಿಸಿದರೆ ಉತ್ತಮ ಲಾಭವನ್ನೇ ಮಾಡುವ ಕಾರಣದಿಂದಾಗಿ ಆರ್ಥಿಕ ಪರಿಸ್ಥಿತಿ ಕೂಡ ಸುಧಾರಿಸಲಿದೆ. ಹಲವಾರು ಸಮಯಗಳಿಂದ ನಿಮ್ಮನ್ನು ಕಾಡುತ್ತಿದ್ದ ಕೋರ್ಟ್, ಕಚೇರಿ ವ್ಯಾಜ್ಯಗಳು ಕೂಡ ಪರಿಹಾರ ಗೊಳ್ಳಲಿವೆ. ಇನ್ನು ಈ ಸಂದರ್ಭದಲ್ಲಿ ನಿಮಗೆ ಶೇರು ಮಾರುಕಟ್ಟೆಯ ಹೂಡಿಕೆ ಹಾಗೂ ಲಾಟರಿಯಲ್ಲಿ ಸಾಕಷ್ಟು ದೊಡ್ಡ ಮಟ್ಟದ ಫಲಿತಾಂಶವನ್ನು ನೋಡುವ ಯೋಗ ಇದೆ ಎಂಬುದಾಗಿ ಉಲ್ಲೇಖಿತವಾಗಿದೆ.

ವೃಶ್ಚಿಕ ರಾಶಿ; ಮಂಗಳನ ಸಂಗ್ರಮಣದಿಂದಾಗಿ ಹಲವಾರು ದಿನಗಳಿಂದ ಅರ್ಧದಲ್ಲಿಯೇ ನಿಂತುಕೊಂಡಿರುವ ಕೆಲಸಗಳು ವೇಗ ಗತಿಯನ್ನು ಪಡೆದುಕೊಂಡು ಸಂಪೂರ್ಣ ಯಶಸ್ವಿಯಾಗಲಿವೆ. ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುತ್ತಾರೆ. ಈ ಸಂದರ್ಭದಲ್ಲಿ ನಿಮಗೆ ವಿದೇಶಿ ಪ್ರಯಾಣ ಕೂಡ ಒದಗಿ ಬರುವ ಸಾಧ್ಯತೆ ಹೆಚ್ಚಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಮಂಗಳನ ಸಂಕ್ರಮಣ ಎನ್ನುವುದು ನಿಮಗೆ ಇಷ್ಟೊಂದು ದಿನಗಳು ನೀವು ಅನುಭವಿಸುತ್ತಿದ್ದ ಕಷ್ಟ ಕಾಲದಿಂದ ನಿಮ್ಮನ್ನು ಹೊರ ತರಲಿದೆ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.