ಚಿತ್ರರಂಗಕ್ಕೆ ಮುದ್ದಿನ ಮಗ ವಿನೀಶ್ ಎಂಟ್ರಿ ಬಗ್ಗೆ ಡಿ ಬಾಸ್ ದರ್ಶನ್ ಹೇಳಿದ್ದೇನು ಗೊತ್ತಾ? ಫ಼್ಯಾನ್ಸ್ ಶಾಕ್ ಆಗಿದ್ದು ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ತಮ್ಮ ಚಿತ್ರದ ಮೂಲಕ ಅಭಿಮಾನಿಗಳ ಮನೆಗೆಲ್ಲಲು ಎಷ್ಟು ಪರಿಶ್ರಮ ಪಡುತ್ತಾರೆ ಎಂಬುದು ನಿಮಗೆಲ್ಲ ಗೊತ್ತಿದೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಗನಾಗಿರುವ ವಿನಿಷ್ ಕೂಡ ತಂದೆ ಜೊತೆಗೆ ಒಟ್ಟಾರೆಯಾಗಿ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೊದಲ ಬಾರಿಗೆ ವಿನೀಶ್ ತಮ್ಮ ತಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆಗೆ ಐರಾವತ ಸಿನಿಮಾದಲ್ಲಿ ಕ್ಲೈಮ್ಯಾಕ್ಸ್ ನಲ್ಲಿ ಕಾಣಿಸಿಕೊಳ್ಳುತ್ತಾರೆ.
ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಯಜಮಾನ ಸಿನಿಮಾದಲ್ಲಿ ವಿನೇಶ್ ವಿಶೇಷ ಹಾಡಿನಲ್ಲಿ ತಂದೆಯ ಜೊತೆಗೆ ಸ್ಟೆಪ್ ಹಾಕಿದ್ದಾರೆ. ಸದ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕ್ರಾಂತಿ ಸಿನಿಮಾದ ಚಿತ್ರೀಕರಣದಲ್ಲಿ ವ್ಯಸ್ತರಾಗಿದ್ದಾರೆ. ಇತ್ತೀಚಿಗಷ್ಟೇ ತಮ್ಮ ಹೊಸ ಸಿನಿಮಾದ ಲಾಂಚ್ ಸಂದರ್ಭದಲ್ಲಿ ತಮ್ಮ ಮಗನ ಸಿನಿಮಾ ಎಂಟ್ರಿ ಕುರಿತಂತೆ ಕೂಡ ಯುಟ್ಯೂಬ್ ಚಾನೆಲ್ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. ಹಾಗಿದ್ದರೆ ತಮ್ಮ ಮಗನ ಸಿನಿಮಾ ಎಂಟ್ರಿ ಯ ಕುರಿತಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಏನು ಹೇಳಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ನನ್ನ ತಂದೆ ಸಿನಿಮಾ ನಟರಾಗಿದ್ದರು ಕೂಡ ನಾನು ಚಿತ್ರರಂಗಕ್ಕೆ ಬರುವುದಕ್ಕೂ ಮುನ್ನ ಲೈಟ್ ಬಾಯ್ ಆಗಿ ಕೆಲಸ ಮಾಡಿ ಸಾಕಷ್ಟು ಕಷ್ಟಪಟ್ಟು ಇಲ್ಲಿಗೆ ಬಂದಿದ್ದೇನೆ. ನನ್ನ ಮಗನಿಗೂ ಕೂಡ ಯಾವ ಯಶಸ್ಸು ಕೂಡ ಸುಲಭವಾಗಿ ಸಿಗಬಾರದು ಅದಕ್ಕಾಗಿ ಆತ ಕಷ್ಟ ಪಡಬೇಕು, ಅದಕ್ಕೆ ಬೇಕಾಗಿರುವ ಎಲ್ಲಾ ತಯಾರಿಗಳನ್ನು ಮಾಡಿಕೊಂಡ ನಂತರವೇ ಆತ ಚಿತ್ರರಂಗಕ್ಕೆ ಕಾಲಿಡಬೇಕು ಎಂಬುದಾಗಿ ದರ್ಶನ್ ರವರು ತಮ್ಮ ಮಗನ ಸಿನಿಮಾ ಎಂಟ್ರಿಯ ಕುರಿತಂತೆ ಮನ ಬಿಚ್ಚಿ ಮಾತನಾಡಿದ್ದಾರೆ. ದರ್ಶನ್ ರವರ ಈ ಹೇಳಿಕೆ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ.