ನಾಲ್ಕು ಪಂದ್ಯವಾಡಿರುವ ಯುವ ಆಟಗಾರ ವಿಶ್ವದ ನಂಬರ್ 1 ಆಟಗಾರನಾಗುತ್ತಾನೆ, ಈ ಕೂಡಲೇ ವಿಶ್ವಕಪ್ ಗೆ ಆಯ್ಕೆ ಮಾಡಿ ಎಂದು ಶ್ರೀಕಾಂತ್. ಯಾರಂತೆ ಗೊತ್ತೆ??
ನಮಸ್ಕಾರ ಸ್ನೇಹಿತರೇ ಯತೀಶ ದಿನಗಳಲ್ಲಿ ಭಾರತೀಯ ಕ್ರಿಕೆಟ್ ಸಂಸ್ಥೆ ಹಲವಾರು ಆಟಗಾರರನ್ನು ಸಾಗಿ ಬರುತ್ತಿರುವ ಸರಣಿಗಳಲ್ಲಿ ಪ್ರಯೋಗಿಸುತ್ತಿದೆ. ಕಳೆದ ಬಾರಿ ಟಿ20 ವಿಶ್ವಕಪ್ ನಲ್ಲಿ ಸೋತಿರುವ ಹಿನ್ನೆಲೆಯಲ್ಲಿ ಈ ಬಾರಿ ಯಾವುದೇ ತಪ್ಪುಗಳು ತಂಡದ ಆಯ್ಕೆಯಲ್ಲಿ ನಡೆಯಬಾರದು ಎನ್ನುವ ಕಾರಣಕ್ಕಾಗಿ ಭಾರತೀಯ ಕ್ರಿಕೆಟ್ ಸಂಸ್ಥೆ ಹಾಗೂ ತಂಡದ ಕೋಚ್ ಮತ್ತು ನಾಯಕ ಈ ರೀತಿಯ ನಿರ್ಧಾರವನ್ನು ಕೈಗೊಳ್ಳುತ್ತಿದ್ದಾರೆ ಎಂಬುದಾಗಿ ಅಂದುಕೊಳ್ಳಬಹುದು.
ಅದರಲ್ಲೂ ವಿಶೇಷವಾಗಿ ಯುವ ಬ್ಯಾಟ್ಸ್ಮನ್ ಹಾಗೂ ಯುವ ಬೌಲರ್ಗಳನ್ನು ಹೆಚ್ಚಾಗಿ ಭಾರತೀಯ ಕ್ರಿಕೆಟ್ ಸಂಸ್ಥೆ ಪ್ರಯೋಗ ನಡೆಸುತ್ತಿದ್ದು ಮುಂದಿನ ಏಷ್ಯಾ ಕಪ್ ಹಾಗೂ ಟಿ20 ವಿಶ್ವಕಪ್ ನಲ್ಲಿ ಇವರನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಸಿದ್ಧತೆಯಲಿದೆ. ಅದರಲ್ಲೂ ಇತ್ತೀಚಿಗಷ್ಟೇ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಆಗಿರುವ ಕೇಸರಿಕಾಂತ್ ರವರು ಈ ಆಟಗಾರನನ್ನು ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡ ಆಡಿಸಲೇಬೇಕು, ಈತ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿ ಆಟವಾಡುತ್ತಿದ್ದಾನೆ ಮುಂದಿನ ದಿನಗಳಲ್ಲಿ ವಿಶ್ವದ ನಂಬರ್ ಒನ್ ಬೌಲರ್ ಆಗಿ ಕಾಣಿಸಿಕೊಳ್ಳುವ ಕ್ಷಮತೆ ಕೂಡ ಇತರ ಬಳಿ ಇದೆ ಎಂಬುದಾಗಿ ಈ ಆಟಗಾರರನ್ನು ಬೆಂಬಲಿಸಿದ್ದಾರೆ. ಕೆ ಶ್ರೀಕಾಂತ್ ರವರು ಬೆಂಬಲಿಸಿರುವ ಆಟಗಾರ ಇನ್ಯಾರು ಅಲ್ಲ ಐಪಿಎಲ್ ನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಅರ್ಷದೀಪ್ ಸಿಂಗ್.

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಪಾದರ್ಪಣೆ ಮಾಡಿರುವ ಅರ್ಷದೀಪ್ ಸಿಂಗ್ ಆಡಿರುವ ನಾಲ್ಕು ಪಂದ್ಯಗಳಲ್ಲಿ ಆರು ವಿಕೆಟ್ಗಳನ್ನು ಕಿತ್ತು ಕೇವಲ 6.51 ಆವರೇಜ್ ನಲ್ಲಿ ರನ್ ಅನ್ನು ಬಿಟ್ಟುಕೊಟ್ಟಿದ್ದಾರೆ. ಅದರಲ್ಲಿ ವಿಶೇಷವಾಗಿ ಕೊನೆಯ ಓವರ್ ಗಳಲ್ಲಿ ಜಸ್ಪ್ರೀತ್ ಭೂಮ್ರ ಅವರಂತೆ ತಂಡದ ಪರಿಣಾಮಕಾರಿಯಾಗಿ ಬೌಲರ್ ಆಗಿ ಪರಿಣಮಿಸಲಿದ್ದು ಮುಂದಿನ ದಿನಗಳಲ್ಲಿ ನಂಬರ್ ವನ್ ಬೌಲರ್ ಆಗಿ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂಬುದಾಗಿ ಕೆ ಶ್ರೀಕಾಂತ್ ರವರು ಹೇಳಿದ್ದಾರೆ.