ಇಷ್ಟು ದಿವಸ ಸುಮ್ಮನೆ ಇದ್ದು, ವಿಕ್ರಾಂತ್ ರೋಣ ರಿಲೀಸ್ ಗು ಮುನ್ನ ಷಾಕಿಂಗ್ ಟ್ವೀಟ್ ಮಾಡಿದ ರಾಜಮೌಳಿ. ಹೇಳಿದ್ದೇನು ಗೊತ್ತೇ?? ಈಗ ಯಾಕೆ ಎಂದ ನೆಟ್ಟಿಗರು.
ನಮಸ್ಕಾರ ಸ್ನೇಹಿತರೇ ವಿಕ್ರಾಂತ್ ಸಿನಿಮಾದ ಕುರಿತಂತೆ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಯಾವ ಮಟ್ಟಿಗೆ ನಿರೀಕ್ಷೆ ಇದೆ ಎಂಬುದನ್ನು ಈಗಾಗಲೇ ನೀವು ಸೋಶಿಯಲ್ ಮೀಡಿಯಾ ಮೂಲಕ ತಿಳಿದುಕೊಂಡಿದ್ದೀರಿ. ಈಗಾಗಲೇ ಹಲವಾರು ಭಾರತೀಯ ಚಿತ್ರರಂಗದ ಖ್ಯಾತನಾಮರು ಕೂಡ ಚಿತ್ರವನ್ನು ವೀಕ್ಷಿಸಿ ಚಿತ್ರದ ಕುರಿತಂತೆ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಇಂದು ಚಿತ್ರ ಈಗಾಗಲೇ ಬಿಡುಗಡೆಯಾಗಿದೆ.
ಚಿತ್ರದ ಕುರಿತಂತೆ ವಿದೇಶ ಸೇರಿದಂತೆ ನಮ್ಮ ಭಾರತ ದೇಶದ ಹಲವಾರು ರಾಜ್ಯಗಳಲ್ಲಿ ಕೂಡ ನೋಡಿದ ಪ್ರೇಕ್ಷಕರು ಚಿತ್ರದ ಕುರಿತಂತೆ ಪಾಸಿಟಿವ್ ರೆಸ್ಪಾನ್ಸ್ ನೀಡುತ್ತಿದ್ದಾರೆ. ವಿಕ್ರಾಂತ್ ರೋಣ ಬಾಕ್ಸಾಫೀಸಿನಲ್ಲಿ ಭರ್ಜರಿ ಯಶಸ್ಸನ್ನು ಪಡೆಯುವುದು ಸಿದ್ಧಹಸ್ತ ಎಂಬುದಾಗಿ ಪಾಸ್ ಮಾರ್ಕ್ ನೀಡಿದ್ದಾರೆ. ಆದರೆ ಕಿಚ್ಚ ಸುದೀಪ್ ಪರವರ ಪರಮಾಪ್ತ ರಾಗಿರುವ ಭಾರತೀಯ ಚಿತ್ರರಂಗದ ಅತ್ಯಂತ ಶ್ರೇಷ್ಠ ಹಾಗೂ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರಾಗಿರುವ ರಾಜಮೌಳಿ ರವರು ಮಾತ್ರ ಬಿಡುಗಡೆಯ ಕೊನೆಯ ಗಳಿಗೆಯಲ್ಲಿ ಟ್ವಿಟರ್ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಹೌದು ಗೆಳೆಯರೇ ಟ್ವಿಟರ್ನಲ್ಲಿ ರಾಜಮೌಳಿಯವರು ಕಿಚ್ಚ ಸುದೀಪ್ ಮೊದಲಿನಿಂದಲೂ ಕೂಡ ಚಾಲೆಂಜಿಂಗ್ ಪಾತ್ರಗಳನ್ನು ಹಾಗೂ ಸಿನಿಮಾಗಳನ್ನು ಮಾಡುವಲ್ಲಿ ನಿಪುಣರು. ವಿಕ್ರಾಂತ್ ರೋಣ ಕೂಡ ಇದೇ ಮಾದರಿಯ ಸಿನಿಮಾ ವಾಗಿದ್ದು ಕಿಚ್ಚ ಸುದೀಪ್ ಹಾಗೂ ವಿಕ್ರಾಂತ್ ರೋಣ ಚಿತ್ರತಂಡಕ್ಕೆ ಶುಭ ಹಾರೈಸಿದರು ಎಂಬುದಾಗಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಇದನ್ನು ನೋಡಿರುವ ಅಭಿಮಾನಿಗಳು ಹಾಗೂ ಸಿನಿಮಾ ರಸಿಕರು ಕೊನೆಯ ಗಳಿಗೆಯಲ್ಲಿ ವಿಶ್ ಮಾಡುವ ಬದಲು ಸ್ವಲ್ಪ ದಿನ ಮುಂಚೆ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ ತೆಲುಗು ಪ್ರಾಂತದಲ್ಲಿ ಚಿತ್ರದ ಕುರಿತಂತೆ ಇನ್ನಷ್ಟು ಪ್ರಚಾರ ಸಿಕ್ಕಿ ಚಿತ್ರದ ಕಲೆಕ್ಷನ್ ಹೆಚ್ಚಾಗುತ್ತಿತ್ತು ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.