ತೆಲುಗಿನಲ್ಲಿ ಮತ್ತೊಂದು ಗುಸು ಗುಸು: ಹೋಟೆಲ್ ಘಟನೆ ಬಳಿಕ ನರೇಶ್-ಪವಿತ್ರ ತೆಗೆದುಕೊಂಡರೆ ಖಡಕ್ ನಿರ್ಧಾರ ಏನು ಗೊತ್ತೇ?
ನಮಸ್ಕಾರ ಸ್ನೇಹಿತರೆ ಸದ್ಯದ ಮಟ್ಟಿಗೆ ಪ್ರತಿಯೊಂದು ಸುದ್ದಿ ವಾಹಿನಿಗಳಲ್ಲಿ ಪದೇಪದೇ ಕೇಳಿಬರುತ್ತಿರುವ ಒಂದೇ ಒಂದು ವಿಚಾರವೆಂದರೆ ಅದು ನರೇಶ್ ಪವಿತ್ರ ಲೋಕೇಶ್ ಹಾಗೂ ರಮ್ಯಾ ರವರ ನಡುವಿನ ವೈಯಕ್ತಿಕ ವಿಚಾರ ಈಗ ಬೀದಿ ನಾಟಕ ಆಗಿರುವ ವಿಚಾರ. ಹೌದು ಗೆಳೆಯರೇ ತೆಲುಗು ನಟ ನರೇಶ್ ರವರ ಮೂರನೇ ಪತ್ನಿ ರಮ್ಯಾ ರಘುಪತಿ ರವರು ನರೇಶ್ ರವರ ವಿರುದ್ಧ ಅವರು ಪವಿತ್ರ ಲೋಕೇಶ್ ರವರ ಜೊತೆಗೆ ಹಲವಾರು ವರ್ಷಗಳಿಂದ ಲಿವಿಂಗ್ ಟುಗೆದರ್ ರಿಲೇಷನ್ಶಿಪ್ ನಲ್ಲಿದ್ದಾರೆ ಎಂಬುದಾಗಿ. ಕೇವಲ ಎಷ್ಟು ಮಾತ್ರವಲ್ಲದೆ ಸುದ್ದಿವಾಹಿನಿಗಳ ಸಂದರ್ಶನದಲ್ಲಿ ರಮ್ಯಾ ರಘುಪತಿ ನರೇಶ್ ಒಬ್ಬ ಹೆಣ್ಣುಬಾಕ ಎನ್ನುವುದಾಗಿ ಕೂಡ ಆರೋಪವನ್ನು ಮಾಡಿದ್ದನ್ನು ನೀವು ನೋಡಿರಬಹುದು.
ಎರಡು ಕಡೆಗಳಿಂದ ಆರೋಪ-ಪ್ರತ್ಯಾರೋಪಗಳು ದೊಡ್ಡಮಟ್ಟದಲ್ಲಿ ನಡೆದಿತ್ತು. ಅದರಲ್ಲೂ ಇತ್ತೀಚಿಗಷ್ಟೇ ರಮ್ಯಾ ರಘುಪತಿ ರವರು ಮೈಸೂರಿನ ಹೋಟೆಲೊಂದರಲ್ಲಿ ನರೇಶ್ ಹಾಗೂ ಪವಿತ್ರ ಲೋಕೇಶ್ ಇಬ್ಬರನ್ನು ಕೂಡ ಒಟ್ಟಿಗೆ ಕಂಡ ಮೇಲಂತೂ ದೊಡ್ಡ ಮಟ್ಟದಲ್ಲಿ ರಂಪಾರಾಮಾಯಣ ಮಾಡಿದ್ದನ್ನು ನೀವು ಸುದ್ದಿವಾಹಿನಿಗಳಲ್ಲಿ ನೋಡಿರಬಹುದು. ಅನಂತರ ರಮ್ಯಾ ರಘುಪತಿ ರವರು ಕೂಡ ಅವರ ತಾಯಿ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಸುಮ್ಮನಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇದೇ ಹಿನ್ನೆಲೆಯಲ್ಲಿ ಪವಿತ್ರ ಲೋಕೇಶ್ ಸೇರಿದಂತೆ ನರೇಶ್ ರವರು ಒಂದು ಗಟ್ಟಿ ನಿರ್ಧಾರಕ್ಕೆ ಬಂದಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಹೌದು ಗೆಳೆಯರೇ ನರೇಶ್ ಹಾಗೂ ಪವಿತ್ರ ಲೋಕೇಶ್ ಇಬ್ಬರು ಕೂಡ ಇನ್ನು ಮುಂದೆ ಮಾಧ್ಯಮದ ಎದುರು ಯಾವುದೇ ಪ್ರತಿಕ್ರಿಯೆ ನೀಡಲು ಸಿದ್ದರಿಲ್ಲ ಎಂಬುದಾಗಿ ತಿಳಿದುಬಂದಿದೆ. ಇನ್ನೇನಿದ್ದರೂ ಕಾನೂನಾತ್ಮಕ ಹೋರಾಟ ಮಾಡುವುದಾಗಿ ಇಬ್ಬರು ನಿರ್ಧರಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಅತಿಶೀಘ್ರದಲ್ಲೇ ನರೇಶ್ ರವರು ರಮ್ಯ ರಘುಪತಿ ರವರಿಗೆ ವಿವಾಹ ವಿಚ್ಛೇದನದ ನೋಟಿಸ್ ನೀಡುವುದಾಗಿ ಅವರ ಆಪ್ತ ವಲಯದಿಂದ ತಿಳಿದುಬಂದಿದೆ.