ಇನ್ನೇನು ತಾಳಿ ಕಟ್ಟಿ ಮದುವೆ ಮುಗಿಯುತ್ತದೆ ಎನ್ನುವಷ್ಟರಲ್ಲಿ ಇದ್ದಕ್ಕಿದ್ದ ಹಾಗೆ ಬೇರೊಬ್ಬ ಮಾಡಿದ್ದೇನು ಗೊತ್ತೇ? ಕೊನೆಗೆ ಏನಾಗಿದೆ ಗೊತ್ತೇ?
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ವಿಚಾರ ಕೊಂಚಮಟ್ಟಿಗೆ ಮಸಾಲೆ ಹೊಂದಿದ್ದರೂ ಕೂಡ ಅದು ವೀಕ್ಷಕರಿಗೆ ರುಚಿಸಿ ದೊಡ್ಡಮಟ್ಟದಲ್ಲಿ ವೈರಲ್ ಆಗಿಬಿಡುತ್ತದೆ. ಇನ್ನು ನಾವು ಮಾತನಾಡಲು ಹೊರಟಿರುವುದು ಕೂಡ ಇದೇ ರೀತಿಯ ಒಂದು ಇತ್ತೀಚಿಗಷ್ಟೆ ನಡೆದಿರುವ ನೈಜ ಘಟನೆ ಕುರಿತಂತೆ. ಹೌದು ಗೆಳೆಯರೇ ಈ ಘಟನೆ ಬಿಹಾರದಲ್ಲಿ ನಡೆದಿದ್ದು ಇನ್ನೇನು ಹುಡುಗಿಗೆ ಹುಡುಗ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಆಕೆಯ ಪ್ರಿಯಕರ ಬಂದು ಮಾಡಿದಂತಹ ಕೆಲಸ ಈಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.
ಆ ಯುವತಿ ಹಾಗೂ ಮುಖೇಶ್ ಇಬ್ಬರೂ ಕೂಡ ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇದರ ಕುರಿತಂತೆ ಹುಡುಗಿಯ ಮನೆ ಅವರಿಗೆ ತಿಳಿದು ಇದು ಮುಂದುವರೆದರೆ ದೊಡ್ಡ ತಾಪತ್ರಯ ಆಗುತ್ತದೆ ಎಂಬುದಾಗಿ ತಿಳಿದು ಕೂಡಲೇ ಆಕೆಗೆ ಹುಡುಗನನ್ನು ಹುಡುಕಿ ಮದುವೆ ಮಾಡಲು ಸಿದ್ಧರಾಗುತ್ತಾರೆ. ಆ ಹುಡುಗಿ ಇದರ ಕುರಿತಂತೆ ತನ್ನ ಪ್ರಿಯಕರ ಮುಕೇಶ್ ನಿಗೆ ಹೇಳಿ ಆತ ಕೂಡ ಇದರ ಕುರಿತಂತೆ ಇಬ್ಬರು ಸೇರಿ ಮೊದಲೇ ಯೋಜನೆಯನ್ನು ಹಾಕಿಕೊಳ್ಳುತ್ತಾರೆ. ಮೊದಲೇ ಮಾಡಿಕೊಂಡಿರುವ ಯೋಜನೆಯಂತೆ ಇನ್ನೇನು ತಾಳಿಕಟ್ಟಲು ಕೆಲವೇ ನಿಮಿಷಗಳಿರಬೇಕು ಎನ್ನುವಷ್ಟರಲ್ಲಿ ಆತ ಮದುವೆ ಮಂಟಪವನ್ನು ಏರಿದ್ದಾನೆ. ಎಲ್ಲರ ಸಮ್ಮುಖದಲ್ಲಿ ಆ ಹುಡುಗಿ ನನ್ನ ಹಣೆಗೆ ಸಿಂಧೂರ ಎಂಬುದಾಗಿ ಹೇಳಿದ್ದಾಳೆ ಆತ ಕೂಡ ಇಟ್ಟಿದ್ದಾನೆ.

ಇಷ್ಟು ನಡೆದಿದ್ದೇ ತಡ ಹುಡುಗಿಯ ಮನೆಯವರು ಹುಡುಗನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಈಗಾಗಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಆತನ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂಬುದಾಗಿ ತಿಳಿದುಬಂದಿದೆ. ಇದನ್ನು ನೋಡಿದ ನಂತರ ಮದುವೆ ಆಗಬೇಕಾಗಿದ್ದ ಹುಡುಗ ಕೂಡ ಮದುವೆಗೆ ಹಿಂದೇಟು ಹಾಕಿದ್ದ. ಈ ಪರಿಸ್ಥಿತಿ ತಿಳಿಯುತ್ತಿದ್ದಂತೆ ಪೊಲೀಸರು ಕೂಡ ಸ್ಥಳಕ್ಕೆ ಧಾವಿಸಿ ಪ್ರಕರಣವನ್ನು ದಾಖಲಿಸಿದ್ದಾರೆ. ಈ ಘಟನೆಯ ಕುರಿತಂತೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ ತಿಳಿಸಿ.