ಬಿಗ್ ನ್ಯೂಸ್; ಮದುವೆಯಾದ ಮೇಲೆ ರಶ್ಮಿಕಾ ರವರ ಜೀವನ ಹೇಗಿರಲಿದೆ ಗೊತ್ತೇ?? ಖ್ಯಾತ ಜ್ಯೋತಿಷಿಗಳಿಂದ ಷಾಕಿಂಗ್ ಭವಿಷ್ಯವಾಣಿ. ಪಾಪ ಮದುವೆಯಾದ ಮೇಲೆ ಏನಾಗುತ್ತದೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ಪ್ರತಿಯೊಂದು ಪ್ರಮುಖ ಭಾಷಾ ಚಿತ್ರರಂಗದಿಂದ ಅತ್ಯಂತ ಬೇಡಿಕೆಯನ್ನು ಹೊಂದಿರುವ ಏಕೈಕ ನಟಿ ಎಂದರೆ ಅದು ಖಂಡಿತವಾಗಿ ಕಣ್ಣುಮುಚ್ಚಿಕೊಂಡು ರಶ್ಮಿಕಾ ಮಂದಣ್ಣ ಎಂದು ಹೇಳಬಹುದಾಗಿದೆ. ಅಷ್ಟರಮಟ್ಟಿಗೆ ಪ್ರತಿಯೊಂದು ಭಾಷೆಗಳಲ್ಲಿ ಕೂಡ ಜನಪ್ರಿಯತೆಯನ್ನು ಉನ್ನತ ಹಂತದಲ್ಲಿ ಹೊಂದಿದ್ದಾರೆ ಎಂದರೆ ತಪ್ಪಾಗಲಾರದು.
ರಶ್ಮಿಕ ಮಂದಣ್ಣ ನವರನ್ನು ಎಲ್ಲರೂ ಎಷ್ಟೇ ಟ್ರೋಲ್ ಮಾಡಿದರು ಕೂಡ ಅವರ ಜನಪ್ರಿಯತೆ ಹೆಚ್ಚಾಗುತ್ತಿದೆ ಹಾಗೂ ಬೇಡಿಕೆ ಎಲ್ಲಾ ಚಿತ್ರರಂಗಗಳಲ್ಲಿ ವಿಸ್ತರಿಸುತ್ತಿದೆಯೇ ಹೊರತು ಕಡಿಮೆಯಾಗಿಲ್ಲ. ಇತ್ತೀಚಿಗಷ್ಟೇ ರಶ್ಮಿಕ ಮಂದಣ್ಣ ತಮ್ಮ ಹುಟ್ಟುಹಬ್ಬವನ್ನು ಕೂಡ ಆಚರಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ರಣಬೀರ್ ಕಪೂರ್ ಅವರ ಅನಿಮಲ್ ಹಾಗೂ ತಮಿಳು ಚಿತ್ರರಂಗದ ತಲಪತಿ ಖ್ಯಾತಿಯ ವಿಜಯ ರವರ ಮುಂದಿನ ಸಿನಿಮಾದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಕುರಿತಂತೆ ಘೋಷಣೆಗಳು ಈಗಾಗಲೇ ಅಧಿಕೃತವಾಗಿ ಹೊರಬಂದಿದ್ದು ಮುಂದಿನ ದಿನಗಳಲ್ಲಿ ರಶ್ಮಿಕ ಮಂದಣ್ಣ ಹಾಲಿವುಡ್ ಗೆ ಕಾಲಿಟ್ಟರು ಕೂಡ ಆಶ್ಚರ್ಯಪಡಬೇಕಾಗಿಲ್ಲ. ಯಾಕೆಂದರೆ ಭಾರತೀಯ ಚಿತ್ರರಂಗದಲ್ಲಿ ಪ್ರತಿಯೊಬ್ಬ ಸ್ಟಾರ್ ನಟರ ಸಿನಿಮಾಗಳಲ್ಲಿ ಕೂಡ ರಶ್ಮಿಕ ಮಂದಣ್ಣ ಅವರೇ ನಾಯಕಿಯಾಗಿ ಬೇಕು ಎಂದು ನಿರ್ದೇಶಕ ಹಾಗೂ ನಿರ್ಮಾಪಕರು ರಶ್ಮಿಕ ಮಂದಣ್ಣ ನವರ ಹಿಂದೆ ಬಿದ್ದಿದ್ದಾರೆ. ಇನ್ನು ಖ್ಯಾತ ಜ್ಯೋತಿಷಿಯೊಬ್ಬರು ರಶ್ಮಿಕ ಮಂದಣ್ಣ ನವರ ವೈವಾಹಿಕ ಜೀವನದ ಕುರಿತಂತೆ ನುಡಿದಿರುವ ಭವಿಷ್ಯ ಈಗ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಹಾಗಿದ್ದರೆ ಅದೇನು ಎನ್ನುವುದನ್ನು ತಿಳಿಯೋಣ ಬನ್ನಿ.

ಖ್ಯಾತ ಸೆಲೆಬ್ರಿಟಿ ಜ್ಯೋತಿಷಿ ಆಗಿರುವ ವೇಣು ಸ್ವಾಮಿಯವರು ಈ ಹಿಂದೆ ನಾಗಚೈತನ್ಯ ಹಾಗೂ ಸಮಂತ ಇಬ್ಬರೂ ಕೂಡ ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಅದೇರೀತಿ ವೈವಾಹಿಕ ವಿಚ್ಛೇದನವನ್ನು ಪಡೆದುಕೊಂಡಿರುವುದು ನಿಮಗೆಲ್ಲಾ ಗೊತ್ತಿದೆ. ಈಗ ಇದೆ ವೇಣು ಸ್ವಾಮಿ ರಶ್ಮಿಕಾ ಮಂದಣ್ಣ ನವರ ವೈವಾಹಿಕ ಜೀವನ ಎನ್ನುವುದು ಚೆನ್ನಾಗಿ ಇರುವುದಿಲ್ಲ. ಮದುವೆ ಆದ ಮೇಲೆ ಅವರು ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳಲಿದ್ದಾರೆ ಎಂಬುದಾಗಿ ಭವಿಷ್ಯ ನುಡಿದಿದ್ದಾರೆ. ಕನ್ನಡದ ನಟಿಯಾಗಿರುವ ತಾರಾ ರವರು ಕೂಡ ಇವರ ಮಾತಿನಲ್ಲಿ ಸಾಕಷ್ಟು ನಂಬಿಕೆ ಇಡುತ್ತಾರೆ ಯಾಕೆಂದರೆ ಇವರ ಮಾತಿನಂತೆಯೇ ತಾರಾ ಅವರು ರಾಜಕೀಯದಲ್ಲಿ ಯಶಸ್ಸು ಪಡೆಯುತ್ತಾರೆ ಎಂಬುದಾಗಿ ತಿಳಿದುಬಂದಿತ್ತು. ಹೀಗಾಗಿ ವೇಣು ಸ್ವಾಮಿಯವರ ರಶ್ಮಿಕ ಮಂದಣ್ಣ ನವರ ವೈವಾಹಿಕ ಜೀವನದ ಕುರಿತಂತೆ ಹೊರಬಂದಿರುವ ಭವಿಷ್ಯವಾಣಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದೆ.