ನಿನ್ನೆ ಸುದೀಪ್ ಸಿಕ್ಕಿದ್ದ, ಇವತ್ತು ನೀನು ಸಿಕ್ಕಿದ್ದಿಯ ಎಂದು ಬೊಮ್ಮಾಯಿ ಹೇಳಿದಾದ ಡಿ ಬಾಸ್ ರಿಯಾಕ್ಷನ್ ಹೇಗಿತ್ತು ಗೊತ್ತೇ?? ಸಿಳ್ಳೆ ಹೊಡೆದ ಫ್ಯಾನ್ಸ್, ಯಾಕೆ ಗೊತ್ತೇ??

9,982

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಒಂದು ಕಾಲದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಒಂದೇ ಜೀವ ಎರಡು ದೇಹ ಎನ್ನುವಷ್ಟರಮಟ್ಟಿಗೆ ಸ್ನೇಹವನ್ನು ಹೊಂದಿದ್ದರು. ಸ್ನೇಹಕ್ಕೆ ಬ್ರಾಂಡ್ ಅಂಬಾಸಿಡರ್ ಆಗಿದ್ದರು ಎಂದರೂ ಕೂಡ ಖಂಡಿತ ತಪ್ಪಾಗಲಾರದು.

ಐದು ವರ್ಷಗಳ ಹಿಂದೆ ಇವರಿಬ್ಬರ ನಡುವೆ ನಡೆದಿರುವಂತಹ ಭಿನ್ನಾಭಿಪ್ರಾಯಗಳಿಂದಾಗಿ ಇಬ್ಬರೂ ಕೂಡ ಈಗಾಗಲೇ ಮುನಿಸನ್ನು ಹೊಂದಿದ್ದು ಒಬ್ಬರು ಹೋದ ಕಡೆಗೆ ಇನ್ನೊಬ್ಬರು ಕಾಲಿಡುತ್ತಿಲ್ಲ ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವಂತಹ ಸತ್ಯವಾಗಿದೆ. ಈ ವಿಚಾರವನ್ನು ಬಿಟ್ಟುಬಿಡೋಣ ಇತ್ತೀಚಿನ ದಿನಗಳಲ್ಲಿ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಆಗಿರುವ ಬಸವರಾಜ ಬೊಮ್ಮಾಯಿ ರವರು ಸಿನಿಮಾ ಕ್ಷೇತ್ರದ ಕುರಿತಂತೆ ಸಾಕಷ್ಟು ವಿಶೇಷ ಆಸಕ್ತಿಯನ್ನು ಕೂಡ ಹೊಂದಿದ್ದಾರೆ ಎನ್ನುವುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಹಲವಾರು ವಿಚಾರಗಳಲ್ಲಿ ಸಿನಿಮಾ ಕ್ಷೇತ್ರದ ಜನರೊಂದಿಗೆ ಅಭಿವೃದ್ಧಿ ಕಾರ್ಯದಲ್ಲಿ ಕೂಡ ತಮ್ಮ ಸಹಾಯ ಹಸ್ತವನ್ನು ಚಾಚಿದ್ದಾರೆ. ಇತ್ತೀಚಿಗಷ್ಟೇ ಕಾರ್ಯಕ್ರಮವೊಂದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರೊಂದಿಗೆ ವೇದಿಕೆಯನ್ನು ಕೂಡ ಹಂಚಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ದರ್ಶನ್ ರವರ ಎದುರಿಗೆ ರಾಜ್ಯದ ಮುಖ್ಯಮಂತ್ರಿಗಳಾಗಿ ರುವ ಬಸವರಾಜ ಬೊಮ್ಮಾಯಿ ರವರು ನಿನ್ನೆಯಷ್ಟೇ ಮುನಿರತ್ನ ರವರ ಕಾರ್ಯಕ್ರಮದಲ್ಲಿ ಸುದೀಪ್ ರವರನ್ನು ಭೇಟಿಯಾಗಿದ್ದೆ ಇಂದು ನಿಮ್ಮನ್ನು ಭೇಟಿಯಾಗಿದ್ದೇನೆ ಎಂಬುದಾಗಿ ದರ್ಶನ್ ರವರಿಗೆ ಹೇಳುತ್ತಾರೆ. ಅದಕ್ಕೆ ಅವರು ನೀಡಿರುವ ಪ್ರತಿಕ್ರಿಯೆ ಏನು ಗೊತ್ತಾ. ರಾಜ್ಯದ ಮುಖ್ಯಮಂತ್ರಿಗಳ ಈ ಮಾತನ್ನು ಕೇಳಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕೇವಲ ಮುಗುಳ್ನಕ್ಕು ಸುಮ್ಮನಾಗುತ್ತಾರೆ. ಆದರೆ ಅವರ ಅಭಿಮಾನಿಗಳು ಹರ್ಷೋದ್ಗಾರ ವನ್ನು ಮಾಡಿ ಸಿಳ್ಳೆಯನ್ನು ಹೊ’ಡೆಯುತ್ತಾರೆ. ಈ ವೀಡಿಯೋ ಕೂಡ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಶೇರ್ ಮಾಡಿಕೊಳ್ಳಿ. ನೀವು ಕೂಡ ಕಿಚ್ಚ ದಚ್ಚು ಒಂದಾಗಬೇಕು ಎನ್ನುವ ಆಸೆಯನ್ನು ಹೊಂದಿದ್ದರೇ ಕಾಮೆಂಟ್ ಮೂಲಕ ತಿಳಿಸಿ.