ಸಾಯಿ ಪಲ್ಲವಿ ರವರ ಕುರಿತು ಷಾಕಿಂಗ್ ಹೇಳಿಕೆ ನೀಡಿದ ರಶ್ಮಿಕಾ ಮಂದಣ್ಣ, ಆಕೆಯ ಬಗ್ಗೆ ಮಾತನಾಡಬೇಡ ಎಂದ ಫ್ಯಾನ್ಸ್. ಯಾಕೆ ಗೊತ್ತೇ??

6,069

ನಮಸ್ಕಾರ ಸ್ನೇಹಿತರೇ ರಶ್ಮಿಕ ಮಂದಣ್ಣ ಅವರ ವರ್ಚಸ್ಸು ಎನ್ನುವುದು ಇತ್ತೀಚಿನ ದಿನಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ತೀವ್ರಗತಿಯಲ್ಲಿ ಉನ್ನತಿ ಹಂತವನ್ನು ತಲುಪುತ್ತಿದೆ. ಕನ್ನಡಿಗರಾಗಿ ನಿಜಕ್ಕೂ ಕೂಡ ಇದು ನಮಗೆ ಹೆಮ್ಮೆಯ ವಿಚಾರ. ಒಂದರ ಹಿಂದೊಂದರಂತೆ ರಶ್ಮಿಕ ಮಂದಣ್ಣ ಅವರ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ದೊಡ್ಡಮಟ್ಟದ ಸಂಚಲನವನ್ನೇ ಸೃಷ್ಟಿ ಮಾಡುತ್ತಿವೆ. ದೊಡ್ಡ ದೊಡ್ಡ ಬಜೆಟ್ ನ ಸಿನಿಮಾಗಳ ನಿರ್ಮಾಪಕ ಹಾಗೂ ನಿರ್ದೇಶಕರ ಮೊದಲ ಆಯ್ಕೆಯಾಗಿ ರಶ್ಮಿಕ ಮಂದಣ್ಣ ನವರು ಕಾಣಸಿಗುತ್ತಾರೆ.

ರಶ್ಮಿಕ ಮಂದಣ್ಣ ನವರು ಪಡೆದುಕೊಳ್ಳುತ್ತಿರುವ ಸಂಭಾವನೆ ಕೂಡ ದೊಡ್ಡದೇ. ಇಷ್ಟೊಂದು ತೀವ್ರಗತಿಯಲ್ಲಿ ಇಷ್ಟು ದೊಡ್ಡ ಮಟ್ಟದ ಯಶಸ್ಸನ್ನು ಪಡೆದಿರುವ ನಟಿಯರಲ್ಲಿ ರಶ್ಮಿಕಾ ಮಂದಣ್ಣ ನವರೇ ಅಗ್ರಗಣ್ಯರು ಎಂದು ಹೇಳಬಹುದಾಗಿದೆ. ಇತ್ತೀಚೆಗಷ್ಟೇ ಅಲ್ಲು ಅರ್ಜುನ್ ರವರ ಜೊತೆಗೆ ನಟಿಸಿರುವ ಪುಷ್ಪ ಚಿತ್ರ ಕೂಡ ಪಂಚಭಾಷಾ ಲೆವೆಲ್ ನಲ್ಲಿ ಹಿಂದೆಂದೂ ಕಾಣದಂತಹ ಯಶಸ್ಸು ಕಂಡಿದೆ. ಹಿಂದಿಯಲ್ಲಿ ಕೂಡ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಚಿತ್ರದ ಗೆಲುವಿಗೆ ರಶ್ಮಿಕ ಮಂದಣ್ಣ ನವರು ಜನಪ್ರೀತಿ ಕೂಡ ಮೂಲಕಾರಣ ಎಂದು ಹೇಳಬಹುದಾಗಿದೆ.

ಇತ್ತೀಚಿಗಷ್ಟೇ ಅಡವಾಳ್ಳು ಮೀಕು ಜೋಹಾರ್ಲು ಕಾರ್ಯಕ್ರಮದಲ್ಲಿ ರಶ್ಮಿಕ ಮಂದಣ್ಣ ಅವರ ಜೊತೆಗೆ ಮುಖ್ಯಅತಿಥಿಗಳಾಗಿ ಕೀರ್ತಿ ಸುರೇಶ್ ಹಾಗೂ ಸಾಯಿ ಪಲ್ಲವಿ ಅವರು ಕೂಡ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ರಶ್ಮಿಕ ಮಂದನ್ನ ನವರು ಸಾಯಿಪಲ್ಲವಿ ಅವರ ಕುರಿತಂತೆ ಆಶ್ಚರ್ಯಕರ ಹೇಳಿಕೆಯನ್ನು ನೀಡಿದ್ದಾರೆ. ಹಾಗಿದ್ದರೆ ಅದೇನೆಂಬುದು ನೋಡೋಣ ಬನ್ನಿ. ನೀವು ಇಲ್ಲಿಯವರೆಗೆ ಏನೆಲ್ಲ ಮಾಡಿದ್ದೀರಿ ಆ ಕಾರ್ಯಗಳಿಂದಾಗಿ ನಾವು ನಿಮ್ಮ ಕುರಿತಂತೆ ಹೆಮ್ಮೆಪಟ್ಟು ಕೊಂಡಿದ್ದೇವೆ. ನಿಮ್ಮ ಆಗಮನದಿಂದಾಗಿ ಈ ಕಾರ್ಯಕ್ರಮ ಇನ್ನಷ್ಟು ಕಳೆಗಟ್ಟಿದೆ ಎಂಬುದಾಗಿ ಹೇಳುತ್ತಾ ನೀವು ತುಂಬಾನೇ ಕ್ಯೂಟ್ ಅಲ್ವಾ ಎನ್ನುವುದಾಗಿ ಕ್ಯೂಟ್ ಆಗಿ ಸಾಯಿಪಲ್ಲವಿ ಅವರ ಕುರಿತಂತೆ ಹೇಳಿದ್ದಾರೆ. ಇದಕ್ಕೆ ಪ್ರಟಿರ್ಕಿಯೆ ನೀಡಿರುವ ಫ್ಯಾನ್ಸ್, ಆಕೆಯ ಕುರಿತು ಮಾತನಾಡಬೇಡ, ಆಕೆ ಎಷ್ಟೇ ಎತ್ತರಕ್ಕೆ ಹೋದರೂ ಮಾತೃಭಾಷೆ ಮರೆತಿಲ್ಲ. ಯಾವುದೇ ಕಾಂಟ್ರಾವರ್ಸಿ ಕೂಡ ಇಲ್ಲ, ನೀನು ಪಾಪ್ಯುಲರ್ ಆಗಿರೋದೇ ಅದರಿಂದ ಎಂದು ಟ್ರೊಲ್ ಮಾಡಿದ್ದಾರೆ. ಲೇಖನಿಯ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ತಪ್ಪದೆ ಹಂಚಿಕೊಳ್ಳಿ.