ಕೊನೆಗೂ ಹೊರಬಿತ್ತು ನಟ ಧನುಷ್ ಹಾಗೂ ಐಶ್ವರ್ಯಾ ದಾಂಪತ್ಯಕ್ಕೆ ಹುಳಿ ಹಿಂಡಿದವರ ಹೆಸರು, ಯಾರು ಗೊತ್ತೇ?? ಅದೊಂದು ಫೋಟೋನೇ ಕಾರಣವೇ??
ನಮಸ್ಕಾರ ಸ್ನೇಹಿತರೇ ಮೊದಮೊದಲು ಚಿತ್ರರಂಗದಲ್ಲಿ ಸಿನಿ ತಾರೆಯರು ಮದುವೆಯಾಗುತ್ತಿರುವ ಸುದ್ದಿಗಳು ಹೇರಳವಾಗಿ ಬರುತ್ತಿತ್ತು. ಈಗ ತಾರಾ ದಂಪತಿಗಳು ವಿಚ್ಛೇಧನ ಪಡೆದುಕೊಳ್ಳುತ್ತಿರುವ ಸುದ್ದಿಗಳು ಹೆಚ್ಚು ಕೇಳಿ ಬರುತ್ತಿವೆ. ಹೌದು ಇತ್ತಿಚೆಗಷ್ಟೇ ತೆಲುಗಿನ ಸ್ಟಾರ್ ದಂಪತಿಗಳಾದ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನ ಪಡೆದುಕೊಂಡಿದ್ದರೇ, ಈಗ ತಮಿಳಿನ ಸ್ಟಾರ್ ದಂಪತಿ ಧನುಷ್ ಹಾಗೂ ರಜನಿಕಾಂತ್ ಪರಸ್ಪರ ಸಮ್ಮತಿಯ ಮೇರೆಗೆ ವಿಚ್ಛೇಧನ ಪಡೆದುಕೊಂಡಿದ್ದಾರೆ.
ಈಗ ಈ ವಿಚ್ಛೇಧನಕ್ಕೆ ಕಾರಣ ಯಾರೆಂಬುದು ಬಹಿರಂಗವಾಗಿದೆ. ಈ ವಿಚ್ಛೇದನಕ್ಕೆ ಪ್ರಮುಖ ಕಾರಣವೆಂದರೇ ಅದು ತಮಿಳಿನ ಫೇಮಸ್ ಗಾಯಕಿ ಸುಚಿತ್ರಾ ಕಾರ್ತೀಕ್. ನಿಮಗೆಲ್ಲಾ ನೆನಪಿರುವಂತೆ ಮೀ ಟೂ ಅಭಿಯಾನ ತಾರರಕ್ಕೇರುವಕ್ಕಿಂತ ಮುಂಚೆಯೇ ತಮಿಳುನಾಡಿನಲ್ಲಿ ಆ ಥರದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಅದರಲ್ಲೂ ಧನುಷ್ ಕುಟುಂಬಕ್ಕೆ ಆಪ್ತಳಾಗಿದ್ದ ಗಾಯಕಿ ಸುಚಿತ್ರಾ ಕಾರ್ತೀಕ್, ಒಂದು ದಿನ ಏಕಾಏಕಿ ನಟ ಧನುಷ್ ಹಾಗೂ ಸಂಗೀತ ನಿರ್ದೇಶಕ ಅನಿರುದ್ಧ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆಂದು ಆರೋಪಿಸಿದ್ದರು.

ಇದು ಸಂಪೂರ್ಣ ಕಾಲಿವುಡ್ ನಲ್ಲೇ ಕೋಲಾಹಲ ಸೃಷ್ಠಿಸಿತ್ತು. ಅದಲ್ಲದೇ ಕೆಲವು ನಟನಟಿಯರ ಖಾಸಗಿ ಫೋಟೋಗಳನ್ನು ಸಹ ಬಿಡುಗಡೆ ಮಾಡಿ ಇವರೆಲ್ಲಾ ಈ ಹಗರಣದಲ್ಲಿ ಭಾಗಿಯಾಗಿದ್ದರು ಎಂದು ಹೇಳಿದ್ದರು. ಅಲ್ಲಿ ತನಕ ಸುಂದರವಾಗಿದ್ದ ಧನುಷ್ ಹಾಗೂ ಐಶ್ವರ್ಯ ದಾಂಪತ್ಯ ಕ್ರಮೇಣ ಹಳಸತೊಡಗಿತು. ಆ ಸುಚಿತ್ರಾ ಕಾರ್ತಿಕ್ ವಿಷಯದಿಂದ ದಂಪತಿಗಳ ಮಧ್ಯೆ ಮನೆಯಲ್ಲಿ ಪದೇ ಪದೇ ಜಗಳವಾಗುತ್ತಿತ್ತಂತೆ. ಅದಲ್ಲದೇ ನಟ ಧನುಷ್ ನಟಿ ಅಮಲಾ ಪೌಲ್ ಜೊತೆ ಸಹ ಸಂಭಂದ ಇರಿಸಿಕೊಂಡಿದ್ದ ಸುದ್ದಿ ಹೊರ ಬಂದ ನಂತರ ದಾಂಪತ್ಯ ಮತ್ತಷ್ಟು ಹದಗೆಟ್ಟಿತು. ಹಾಗಾಗಿ ಕೊನೆಗೆ ಅಂತಿಮವಾಗಿ ವಿಚ್ಛೇದನದ ನಿರ್ಧಾರಕ್ಕೆ ಬಂದಿದ್ದಾರೆ.ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.