ಶುಭಪುಂಜಾ ಕಳೆದುಕೊಂಡಿದ್ದ ಅಮೂಲ್ಯ ವ್ಯಕ್ತಿಗಳನ್ನು ಮರಳಿ ಕೊಡಿಸಿದ ಬಿಗ್ಬಾಸ್..! ಅಷ್ಟಕ್ಕೂ ವ್ಯಕ್ತಿಗಳು ಯಾರು ಗೊತ್ತಾ?
ಸ್ನೇಹಿತರೆ, ಬಿಗ್ ಬಾಸ್ನಲ್ಲಿ ಭಾಗವಹಿಸಿದ್ದಕ್ಕೆ ಶುಭಪುಂಜಾ ಬದುಕಿನಲ್ಲಿ ಅನೇಕ ಬದಲಾವಣೆಗಳಾಗಿವೆ ಈ ಬಗ್ಗೆ ಸ್ವತಹ ಶುಭಪುಂಜಾ ಅವರೇ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 8 ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಅರ್ಧಕ್ಕೆ ನಿಂತಿದ್ದರಿಂದ ಬಿಗ್ಬಾಸ್ ಅಭಿಮಾನಿಗಳಿಗೆ ಬೇಜಾರಾಯಿತು. ಈ ಕೋವಿಡ್-19 ಮಿತಿಮೀರಿ ಹರಡುತ್ತಿರುವುದರಿಂದ ಗಡಿಬಿಡಿಯಲ್ಲಿ ಶೋ ನಿಲ್ಲಿಸಬೇಕಾದ ಅನಿವಾರ್ಯತೆ ಎದುರಾಯಿತು. ಇದರಿಂದಾಗಿ 71ನೇ ದಿನಕ್ಕೆ ಮನೆಯಿಂದ ಹೊರಬಂದ ಸ್ಪರ್ಧಿಗಳಿಗೆ ಕೊನೆಕ್ಷಣದಲ್ಲಿ ಸುದೀಪ್ ಜೊತೆ ಮಾತನಾಡಲು ಕೂಡ ಸಾಧ್ಯವಾಗಿರಲಿಲ್ಲ. ಹಾಗಾಗಿ ಅವರೆಲ್ಲರಿಗೂ ಮತ್ತೆ ಕಿಚ್ಚನ ಜೊತೆ ಮಾತನಾಡಲು ಕಲರ್ಸ್ ಕನ್ನಡ ವಾಹಿನಿಯು ಒಂದು ಅವಕಾಶ ಮಾಡಿಕೊಟ್ಟಿದ್ದಾರೆ.
ಹೌದು ವರ್ಚುವಲ್ ಮೀಟ್ ಮೂಲಕ ಸುದೀಪ್ ಬಿಗ್ ಬಾಸ್ ಸ್ಪರ್ಧಿಗಳೊಡನೆ ಮಾತನಾಡಿದ್ದಾರೆ. ಈ ವೇಳೆ ನಟಿ ಶುಭ ಪುಂಜಾ ಕೆಲವು ವಿಚಾರಗಳನ್ನು ಹಂಚಿಕೊಂಡರು ಅಷ್ಟಕ್ಕೂ ಆ ವಿಚಾರವಾದರೂ ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಬಿಗ್ ಬಾಸ್ನಲ್ಲಿ ಭಾಗವಹಿಸಿದ್ದಕ್ಕಾಗಿ ಶುಭಪುಂಜಾ ಬದುಕಿನಲ್ಲಿ ಅನೇಕ ಬದಲಾವಣೆಗಳಾಗಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಆ ಬಗ್ಗೆ ಮಾತನಾಡಿರುವ ಶುಭ ನನ್ನ ಜೀವನದಲ್ಲಿ ನಾನು ತೆಗೆದುಕೊಂಡ ಒಂದು ಅದ್ಭುತ ನಿರ್ಧಾರವಾಗಿತ್ತು.
ಬಿಗ್ ಬಾಸ್ನಲ್ಲಿ ಭಾಗವಹಿಸಿದ ಬಳಿಕ ನನ್ನ ಇಮೇಜ್ ಬದಲಾಗಿದೆ ನಿನ್ನ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ ಎಂದು ನನ್ನ ಹುಡುಗ (ಪಿಯನ್ಸೆ ಸುಮಂತ್) ಹೇಳಿದ. ಜನರು ನನ್ನನ್ನು ಮತ್ತೆ ಇಷ್ಟಪಡಲು ಆರಂಭಿಸಿದ್ದಾರೆ ಎಂದು ಶುಭ ಪೂಂಜಾ ಸಂತೋಷದಿಂದ ತಮ್ಮ ಮಾತುಗಳನ್ನು ಆರಂಭಿಸಿದರು. ಮೊಗ್ಗಿನ ಮನಸ್ಸು ಸಿನಿಮಾ ಆದ ಬಳಿಕ ನನಗೆ ಹೆಚ್ಚು ಮಹಿಳಾ ಅಭಿಮಾನಿಗಳು ಇದ್ದರು ಆದರೆ ನಂತರ ಎಲ್ಲೋ ಒಂದು ಕಡೆ ಫೀಮೇಲ್ ಫ್ಯಾನ್ಸ್ ಫಾಲೋಯಿಂಗ್ ಸಂಪೂರ್ಣ ಕುಸಿದುಹೋಯಿತು. ಈ ವಿಚಾರದಲ್ಲಿ ನಾನು ಸುಳ್ಳು ಹೇಳಬಾರದು ಪಡ್ಡೆಹುಡುಗರ ಫ್ಯಾನ್ ಫಾಲೋಯಿಂಗ್ ಇತ್ತು ಆದರೆ ಇವತ್ತು ನಂಬಲಾರದ ರೀತಿಯಲ್ಲಿ ಮಹಿಳಾ ಅಭಿಮಾನಿಗಳು ಮತ್ತೆ ಸಿಕ್ಕಿದ್ದಾರೆ.
ದಿನಕ್ಕೆ ಸಾವಿರಾರು ಮೆಸೇಜ್ಗಳು ಬರುತ್ತಿವೆ ಎಂದು ಶುಭ ಪುಂಜಾ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ನನಗೆ ಇಷ್ಟೊಂದು ಫಾಲೋಯಿಂಗ್ ಸಿಕ್ಕಿದ್ದು ಬಿಗ್ ಬಾಸ್ನಿಂದಾಗಿ ಈ ಶೋನಿಂದ ಯಾರಿಗೆ ಏನು ಸಿಕ್ಕಿದೆಯೋ ಗೊತ್ತಿಲ್ಲ ಇಷ್ಟು ವರ್ಷ ಕಷ್ಟ ಪಟ್ಟಿದ್ದಕ್ಕೆ ಇಂದು ಬಿಗ್ ಬಾಸ್ ನನಗೆ ಖುಷಿ ನೀಡಿದೆ ಎಂದು ಶುಭ ಪೂಂಜಾ ತಮ್ಮ ಅಭಿಪ್ರಾಯಗಳನ್ನು ಹಚ್ಚಿಕೊಂಡಿದ್ದರು. ಈ ಕುರಿತು ನಿಮ್ಮ ಅನಿಸಿಕೆಗಳೇನು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ…