ಸದ್ಯದಲ್ಲೇ ಮಗಳು ಜಾನಕಿ ಪ್ರಿಯರಿಗೆ ಸಿಹಿ ಸುದ್ದಿ: ಟಿಎನ್ ಸೀತಾರಾಮ್ ಬತ್ತಳಿಕೆಯಿಂದ ಹೊರಬರಲಿದೆ ಮತ್ತೊಂದು ಧಾರವಾಹಿ..!

2

ಸ್ನೇಹಿತರೆ ಕನ್ನಡ ಕಿರುತೆರೆ ಲೋಕದಲ್ಲಿ ಎಷ್ಟು ಧಾರಾವಾಹಿಗಳು ಬಂದುಹೋದರು ಟಿ ಎನ್ ಸೀತಾರಾಮ್ ನಿರ್ದೇಶನದ ಧಾರಾವಾಹಿಗಳ ಪ್ರಭಾವ, ಜನಪ್ರಿಯತೆ ಹಾಗೂ ಪ್ರೇಕ್ಷಕರ ವರ್ಗವೇ ಬೇರೆ. ಇದೀಗ ತಮ್ಮ ಅಭಿಮಾನಿಗಳಿಗೆ ಟಿ ಎನ್ ಸೀತಾರಾಮ್ ಸಿಹಿಸುದ್ದಿ ನೀಡಿದ್ದಾರೆ ಆ ಸುದ್ದಿಯನ್ನು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಮಗಳು ಜಾನಕಿ ಸೀರಿಯಲ್ ಬಳಿಕ ಸೀತಾರಾಮ್ ನಿರ್ದೇಶನದ ಧಾರಾವಾಹಿಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದ ಪ್ರೇಕ್ಷಕರು ಟಿಎಂಎಸ್ರವರ ಹೊಸ ಧಾರಾವಾಹಿ ಯಾವಾಗ ಆರಂಭ ಆಗುತ್ತೆ ಅಂತ ಕೆಳುತ್ತಲೇ ಇದ್ದರು.

ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ ಮತ್ತು ಟಿಎನ್ ಸೀತಾರಾಮ್ ರವರ ಧಾರಾವಾಹಿಯ ಅಭಿಮಾನಿಗಳಿಗೆ ಎಲ್ಲಾ ಸಿಹಿ ಸುದ್ದಿಯೊಂದು ದೊರಕಿದೆ. ಸದ್ಯಕ್ಕೆ ಟಿ ಎನ್ ಸೀತಾರಾಮ್ ಹೊಸ ಧಾರಾವಾಹಿ ಆರಂಭವಾಗಲಿದ್ದು ಯುಗಾದಿ ಬಳಿಕ ಶೂಟಿಂಗ್ ಸ್ಟಾರ್ಟ್ ಮಾಡಲಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ಈ ಬಾರಿಯೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೀತಾರಾಮ್ ರವರ ಧಾರಾವಾಹಿ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ನಂದಿನಿ ಗೌಡ, ಚೈತ್ರ ಶ್ರೀನಿವಾಸ್, ಪ್ರಭು, ಪ್ರವೀಣ್, ಡಿ ರಾವ್ ಮುಖ್ಯಭೂಮಿಕೆಯಲ್ಲಿರುವ ಈ ಧಾರಾವಾಹಿ ಸೀತಾರಾಮ್ ರವರ ಎಲ್ಲ ಧಾರಾವಾಹಿಗಳಂತೆ ಪ್ರಚಲಿತ ಸಮಾಜದ ಸಮಸ್ಯೆಗಳು ಹಾಗೂ ಹೋರಾಟಗಳ ಮೇಲೆ ಬೆಳಕು ಚೆಲ್ಲಲಿದೆ ಎನ್ನಲಾಗುತ್ತಿದೆ.

ಸಮಾಜದಲ್ಲಿ ಹೊಸ ಬೆಳವಣಿಗೆಯನ್ನು ತರಬೇಕು ಎಂಬುವ ಉದ್ದೇಶವನ್ನಿಟ್ಟುಕೊಂಡು ಧಾರಾವಾಹಿ ಮಾಡುವಂತಹ ಟಿಎನ್ ಸೀತಾರಾಮ್ ರವರು ಎಂದಿನಂತೆಯೇ ತಮ್ಮ ಧಾರಾವಾಹಿಗಳಲ್ಲಿ ಕೋರ್ಟ್ ಸೀನ್ ನಲ್ಲಿ ಮಿಂಚುವ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಾರೆ ಸೀತಾರಾಮ್ ಧಾರಾವಾಹಿಗಳ ಪ್ರಿಯರಿಗಾಗಿ ಯುಗಾದಿ ಬಳಿಕ ಹೋಳಿಗೆ ಊಟ ಕೊಡುವುದಂತೂ ಪಕ್ಕಾ ಎಂಬಂತಾಗಿದೆ…