ಲಾಭ-ನಷ್ಟದ ಆಲೋಚನೆ ಮಾಡದೆ ಸೇವೆ ಮಾಡಿದರೆ ಮಹಾ ಶಾಂತಿ ಸಿಗುತ್ತದೆ ಎಂಬುವುದಕ್ಕೆ ಈ ಜನಪದ ಕಥೆಯೇ ಉದಾಹರಣೆ..!

20

ಸ್ನೇಹಿತರೇ, ನಿಷ್ಕಲ್ಮಷ ಹೃದಯದಿಂದ ಸೇವೆ ಮಾಡುವಾಗ ಅದರಿಂದ ಪ್ರಯೋಜನ ಇದೆಯೋ ಇಲ್ಲವೋ ಎಂದು ಯೋಚಿಸಬೇಡಿ ಆಗ ಮಾತ್ರ ಸೇವೆಮಾಡಿದ ತೃಪ್ತಿಯಿಂದ ನಿಮ್ಮ ಮನಸ್ಸು ಶಾಂತಿಯನ್ನು ಪಡೆಯುತ್ತದೆ. ನಾವು ಸೇವೆಯ ಬದಲು ಪ್ರತಿಫಲವನ್ನು ಯೋಚಿಸಿದರೆ ಮನಸ್ಸು ಶಾಂತಿಯುತವಾಗಿ ಇರುವುದಿಲ್ಲ ಎಂದು ಹಿರಿಯರು ಸೇರಿದಂತೆ ಪುರಾಣಗಳಲ್ಲಿ ಹೇಳಲಾಗಿದೆ. ಇಂದು ಅದೇ ರೀತಿಯ ಒಂದು ಜಾನಪದ ಕಥೆಯ ಕುರಿತು ತಿಳಿದುಕೊಳ್ಳೋಣ ಬನ್ನಿ. ಒಬ್ಬ ಸಂತನ ಬಹಳ ವರ್ಷಗಳ ಹಿಂದೆ ಒಂದು ನದಿಯ ದಡದಲ್ಲಿ ಗುಡಿಸಲು ಹಾಕಿಕೊಂಡು ಊರಿನಿಂದ ದೂರದಲ್ಲಿ ವಾಸಿಸುತ್ತಿದ್ದನು‌.

ಗುಡಿಸಲನ್ನು ಆಶ್ರಮ ಮಾಡಿಕೊಂಡು ಒಬ್ಬನೇ ಇದ್ದನು ಅವನ ಆಶ್ರಮದ ಆವರಣದಲ್ಲಿ ಉದ್ದನೆಯ ಹುಲ್ಲು ದಟ್ಟವಾಗಿ ಬೆಳೆದಿತ್ತು. ಈ ಸಂತನಿಗೆ ಈ ರೀತಿಯ ಹುಲ್ಲುಗಳನ್ನು ಬಳಸಿಕೊಂಡು ಬುಟ್ಟಿ ಮಾಡುವುದು ತಿಳಿದಿದ್ದು ಒಂದು ದಿನ ತನ್ನ ದಿನನಿತ್ಯದ ಧ್ಯಾನಮಾಡಿ ಆಶ್ರಮವನ್ನು ಸ್ವಚ್ಛಗೊಳಿಸಿ ಸುಮ್ಮನೆ ಕೊರುವುದು ಯಾಕೆ ಎಂದು ಹುಲ್ಲಿನಿಂದ ಬುಟ್ಟಿಯನ್ನು ಮಾಡಿದನು ಬಹಳ ವರ್ಷ ಆದ ಮೇಲೆ ಮಾಡಿದ ಕೆಲಸ ಸಂತನಿಗೆ ಬಹಳ ಇಷ್ಟವಾಗಿತ್ತು. ಬುಟ್ಟಿ ಮಾಡಿದ ನಂತರ ಇದರಿಂದ ನನಗೆ ಏನು ಪ್ರಯೋಜನವಿಲ್ಲ ನಾನು ಇಟ್ಟುಕೊಂಡು ಏನು ಮಾಡುವುದು ಎಂದು ನದಿಯಲ್ಲಿ ತೇಲಿ ಬಿಟ್ಟನು ಮರುದಿನ ಸಂತ ಮತ್ತೆ ಬುಟ್ಟಿಯನ್ನು ಮಾಡಿ ನದಿಗೆ ಎಸೆದನು ಈ ಬಾರಿ ಕಳೆದ ಬಾರಿಗಿಂತ ಕಡಿಮೆ ಸಮಯ ತೆಗೆದುಕೊಳ್ಳಲಿಲ್ಲ. ಇದರಿಂದ ಸಂತನಿಗೆ ಮತ್ತಷ್ಟು ಖುಷಿಯಾಯಿತು ಇನ್ನೂ ವೇಗವಾಗಿ ಮಾಡಬಹುದು ಎಂದು ಪ್ರತಿದಿನ ಬುಟ್ಟಿಯನ್ನು ತಯಾರಿಸುವುದು ನದಿಯಲ್ಲಿ ತೇಲಿ ಬಿಡುವುದು ಇದನ್ನೇ ಅಭ್ಯಾಸ ಮಾಡಿಕೊಂಡು ಇದರಿಂದ ಸಂತನ ಮನಸ್ಸಿಗೆ ಖುಷಿಯಾಗುತ್ತಿತ್ತು.

ಒಂದು ದಿನ ಸಂತ ನಾನು ಈ ಕೆಲಸವನ್ನು ವ್ಯರ್ಥವಾಗಿ ಮಾಡುತ್ತಿದ್ದೇನೆ ಎಂದು ಭಾವಿಸಿದನು ಮುಳ್ಳುಗಳಿಂದ ಬುಟ್ಟಿಗಳನ್ನು ತಯಾರಿಸುತ್ತೇನೆ ಮತ್ತು ಅದನ್ನು ನದಿಗೆ ಹರಿಸುತ್ತೇನೆ. ಅದರಿಂದ ಯಾರಿಗೂ ಪ್ರಯೋಜನವಿಲ್ಲ ಅದರ ಬದಲು ನಾನೇ ಬುಟ್ಟಿಯನ್ನು ಯಾರಿಗಾದರೂ ನೀಡಿದರೆ ಉಪಯೋಗವಾಗಬಹುದು ಎಂದುಕೊಂಡನು. ಇದರಿಂದ ಸಂತ ಮರುದಿನದಿಂದ ಹುಲ್ಲಿನ ಬುಟ್ಟಿಗಳನ್ನು ತಯಾರಿಸುವುದು ನಿಲ್ಲಿಸಿದನು ಅದ್ಯಾಕೋ ಸಂತೆಗೆ ಮನಸಿಗೆ ಬುಟ್ಟಿಗಳನ್ನು ಮಾಡುವುದು ಬೇಡ ಅನಿಸಿತು. ತದನಂತರ ಮನಸ್ಸಿಗೆ ಶಾಂತಿ ಸಿಗದೇ ಏನೋ ಕಳವಳ ಉಂಟಾದ ಕಾರಣಕ್ಕೆ ಸಂತನ ನದಿಯ ದಡದಲ್ಲಿ ನಡೆದುಕೊಂಡು ಮುಂದೆ ಹೋದಾಗ ನದಿಯ ದಂಡೆಯಲ್ಲಿ ವಯಸ್ಸಾದ ಮಹಿಳೆ ಕುಳಿತಿದ್ದನ್ನು ಅವನು ನೋಡಿದನು ಅವಳು ದುಃಖದಿಂದ ಚಂದ ನನ್ನ ನೋಡಿದಳು.

ಸಂತಾನು ಮಹಿಳೆಯ ದುಃಖದ ಕಾರಣವನ್ನು ಕೇಳಿದಾಗ ಈ ಜಗತ್ತಿನಲ್ಲಿ ನನ್ನವರು ಯಾರು ಇಲ್ಲ ನಾನು ಒಬ್ಬಳೇ. ವಯಸ್ಸಾಗಿದೆ ಕೆಲಸ ಮಾಡಲು ಸಾಧ್ಯವಿಲ್ಲ ಊಟಕ್ಕೆ ಕಷ್ಟಪಡುತ್ತಿರುವ ಸಂದರ್ಭದಲ್ಲಿ ಹುಲ್ಲಿನಿಂದ ಮಾಡಿದ ಸುಂದರವಾದ ಬುಟ್ಟಿಗಳು ಪ್ರತಿದಿನವು ನದಿಯಲ್ಲಿ ಹರಿಯುತ್ತಿದ್ದವು. ಅದನ್ನು ನಾನು ಮಾರಾಟ ಮಾಡುವ ಮೂಲಕ ಬದುಕು ನಡೆಸುತ್ತಿದ್ದಾರೆ ಆದರೆ ಈಗ ಬುಟ್ಟಿಗಳು ಬರುವುದು ನಿಂತು ಹೋಗಿದೆ ಹಾಗಾಗಿ ತುಂಬಾ ಬೇಸರವಾಗಿದೆ ಎಂದು ಹೇಳಿದರು.

ಇದನ್ನು ಕೇಳಿದಂತಹ ಸಂತ ಮರುದಿನದಿಂದ ಮತ್ತೆ ಬುಟ್ಟಿಗಳನ್ನು ತಯಾರಿಸಿ ನದಿಯಲ್ಲಿ ತೇಲಿ ಬಿಡುವುದನ್ನು ಆರಂಭಿಸಿದರು. ಈ ಪ್ರಸಂಗದ ಪಾಠವೆಂದರೆ ನಿಸ್ವಾರ್ಥತೆಯಿಂದ ಯಾರಿಗಾದರೂ ಸಹಾಯ ಮಾಡಲು ಯಾವುದೇ ಕೆಲಸ ಮಾಡಿದರೆ ಅದರಿಂದ ಲಾಭ, ಪ್ರಯೋಜನದ ಬಗ್ಗೆ ಆಲೋಚನೆ ಮಾಡದೆ ಇದ್ದರೆ ಮಾತ್ರ ನಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಅಷ್ಟೇ ಅಲ್ಲದೆ ಕಷ್ಟದಲ್ಲಿರುವವರು ಕೂಡ ನಿಮ್ಮ ಈ ಸದ್ಗುಣಗಳಿಂದ ಪ್ರಯೋಜನವನ್ನು ಪಡೆಯುತ್ತಾರೆ ಹಾಗೂ ನಿಮ್ಮ ಮನಸ್ಸು ಶಾಂತಿಯುತವಾಗಿರುತ್ತದೆ…